ಗೌತಮ ಬುಧ್ದನ ಕಥೆ
೨೬೦೦ ವರ್ಷಗಳ ಹಿಂದೆ ಕಪಿಲವಸ್ತು ಅನ್ನುವ ರಾಜ್ಯ ಇತ್ತು. ಕಪಿಲವಸ್ತು ಇಂದಿನ ಉತ್ತರ ಪ್ರದೇಶದಲ್ಲಿ ಇತ್ತು. ಕಪಿಲವಸ್ತುವಿನ ರಾಜ ಶುದ್ಧೋದನ. ಅವನ ಹೆಂಡತಿಯ ಹೆಸರುಮಹಾಮಾಯ.
ಒಂದು ದಿನ ಮಹಾಮಾಯೆಗೆ ಒಂದು ಕನಸು ಬಿತ್ತು. ಕನಸಿನಲ್ಲಿ ಅವಳಿಗೆ ೬ ದಂತಗಳಿರುವ ಒಂದು ಬಿಳಿಯ ಆನೆ ಕಾಣಿಸಿಕೊಂಡಿತು. ಮರು ದಿನ ಬೆಳಿಗ್ಗೆ ಆಸ್ಥಾನದ ಜ್ಯೋತಿಷಿಯನ್ನು ಕೇಳಿದರು. ಆ ಕನಸಿನ ಅರ್ಥ ಏನು ಅಂತ. ಆಗ ಜ್ಯೋತಿಷಿ ಹೇಳಿದನು ' ರಾಣಿಗೆ ಒಂದು ಗಂಡು ಮಗು ಜನಿಸಲಿದೆ ಅಂತ ಈ ಕನಸಿನ ಅರ್ಥ.' ಸ್ವಲ್ಪ ದಿನಗಳಾದಮೇಲೆ ಮಹಾಮಾಯೆ ಗರ್ಭವತಿ ಆದಳು.
ಗರ್ಭದಲ್ಲಿ ಮಗು ಇದ್ದಾಗ ಅವಳು ಒಮ್ಮೆ ಅವಳ ತಾಯಿಯ ಮನೆಯ ಕಡೆ ಹೊರಟಳು. ದಾರಿಯಲ್ಲಿ ಲೂಮ್ಬಿನಿ ಎನ್ನುವ ಜಾಗದಲ್ಲಿ ವಿಶ್ರಮ ತಗೊಳಲು ನಿಂತಳು. ಅವಳಿಗೆ ಅಲ್ಲಿಯೇ ನೋವ್ವು ಬಂದು ಮಗುವು ಜನಿಸಿತು. ಅವನೇ ಸಿದ್ಧಾರ್ಥ.
ಮಗನ ಜನ್ಮದಿಂದ ತುಂಬಾ ಸಂತೋಷ ಆಯಿತು ರಾಜ ರಾಣಿ ಇಬ್ಬರಿಗೂ. ಏನಿರಬಹುದು ಮಗನ ಭವಿಷ್ಯ ಎಂದು ಕುತೂಹಲದಿಂದ ಮತ್ತೆ ಅರಮನೆಯ ಜ್ಯೋತಿಷಿಯನ್ನು ಕರೆಸಿದನು. ಕರೆದು ತನ್ನ ಮಗನ ಭವಿಷ್ಯದಲ್ಲಿ ಏನಿರಬಹುದು ಎಂದು ಕೇಳಿದನು. ಜ್ಯೋತಿಷಿ ಮಗುವಿನ ಜಾತಕ ಪರಿಶೀಲಿಸಿ ಹೇಳಿದನು - 'ಇವನು ತುಂಬಾ ದೊಡ್ಡ ವ್ಯಕ್ತಿ ಆಗುವನು. ಇತಿಹಾಸದಲ್ಲಿ ಇವನ ಹೆಸರು ಯಾರು ಮರೆಯುವುದಿಲ್ಲ. ಇವನು ಚಕ್ರವರ್ತಿ ಆಗಬಹುದು. ಚಕ್ರವರ್ತಿ ಆದರೆ ಇವನ ರಾಜ್ಯಕ್ಕೆ ಕೊನೆಯೇ ಇಲ್ಲ ಅನ್ನುವಷ್ಟು ದೊಡ್ಡದಾಗಿರುತ್ತದೆ. ಇಲ್ಲ ಅಂದರೆ ಇವನು ಒಬ್ಬ ಸಾಧು ಕೂಡ ಆಗಬಹುದು. '
ಈ ಮಾತನ್ನು ಕೇಳಿದ ಶುದ್ಧೋದನ ತನ್ನ ಮಗ ಚಕ್ರವರ್ತಿಯೇ ಆಗಬೇಕೆಂದು ಗರ್ಜಿಸಿದನು. ಕೇವಲ ಒಬ್ಬ ಸಾಧು ಆಗುವುದು ಅವನಿಗೆ ಇಷ್ಟ ಇರಲಿಲ್ಲ.
ಅಂದಿನಿಂದ ಶುದ್ಧೋಧನ ಸಿದ್ಧಾರ್ಥನಿಗೆ ಜೀವನದ ಯಾವುದೇ ಕಷ್ಟಗಳನ್ನು ಅರಿಯಲು ಬಿಡಲಿಲ್ಲ. ಏನಪ್ಪಾ ಇದರ ಅರ್ಥ ಅಂದರೆ ಸಿದ್ಧಾರ್ಥನು ದೊಡ್ಡವನಾಗಿ ಬೆಳೆದು ಮದುವೆ ಆದರೂ ಒಂದು ಸಾರಿಯೂ ಒಬ್ಬ ರೋಗಿಯನ್ನು ನೋಡಿರಲಿಲ್ಲ. ಒಬ್ಬ ವೃದ್ಧನನ್ನು ನೋಡಿರಲಿಲ್ಲ. ಹೀಗಾಗಿ ಅವನಿಗೆ ಜೀವನದಲ್ಲಿ ಕಷ್ಟಗಳಿರುತ್ತದೆ ಅನ್ನುವುದೇ ಗೊತ್ತಿರಲಿಲ್ಲ. ಅವನು ಒಂದೂ ಕಷ್ಟ ನೋಡದೆ ಇದ್ದರೆ ಯಾಕೆ ಸಾಧು ಆಗುತ್ತಾನೆ ಎಂದು ಶುದ್ಧೋಧನನ ಯೋಚನೆ.
ಸಿದ್ಧಾರ್ಥನ ಸಾರಥಿಯ ಹೆಸರು ಚನ್ನ ಅಂತ. ಒಮ್ಮೆ ಶುದ್ಧೋದನಿಗೆ ಗೊತ್ತಿಲ್ಲದೆ ಸಿದ್ಧಾರ್ಥನು ನಗರದ ಪ್ರವಾಸ ಮಾಡಲು ಚನ್ನನ ಜೊತೆ ಹೊರಟನು. ದಾರಿಯಲ್ಲಿ ಒಬ್ಬ ಭಿಕ್ಷುಕನನ್ನು ನೋಡಿದನು. ಎಂದೂ ಭಿಕ್ಷುಕನನ್ನು ನೋಡದ ಸಿದ್ಧಾರ್ಥ ಆಶ್ಚರ್ಯಗೊಂಡನು. 'ಚನ್ನ, ಅದು ಯಾರು? ಯಾಕೆ ಇಂಥ ಹೊಲಸು ಬಟ್ಟೆ ಹಾಕಿದ್ದಾನೆ. ಯಾಕೆ ಇಷ್ಟು ಆಯಾಸಗೊಂಡಂತೆ ಕಾಣುತ್ತಾನೆ?'
ಚನ್ನ ಹೇಳಿದನು - 'ಸ್ವಾಮಿ, ಅವನು ಒಬ್ಬ ಭಿಕ್ಷುಕ. ಅವನ ಹತ್ತಿರ ದುಡ್ಡಿಲ್ಲ, ಮನೆ ಇಲ್ಲ, ಒಳ್ಳೆ ಬಟ್ಟೆ ಇಲ್ಲ. ಅದಕ್ಕೆ ಹಾಗಿದ್ದಾನೆ.'
ಸಿದ್ಧಾರ್ಥನಿಗೆ ಆಶ್ಚರ್ಯ ಆಯಿತು. ಮುಂದೆ ಹೋದರೆ ಒಬ್ಬ ರೋಗಿಯನ್ನು ನೋಡಿದನು. 'ಚನ್ನ, ಅದು ಯಾರು? ಯಾಕೆ ಅವನು ಅಷ್ಟೊಂದು ಕೆಮ್ಮುತ್ತಿದ್ದಾನೆ? ನೋಡಲು ತುಂಬಾ ನಿಸಶಕ್ತಿಯಿಂದಿದ್ದಾನೆ. ಏನಾಯಿತು ಅವನಿಗೆ?'
ಚನ್ನ ಹೇಳಿದನು - 'ಸ್ವಾಮಿ, ಅವನು ಒಬ್ಬ ರೋಗಿ, ಅವನಿಗೆ ಏನೋ ರೋಗ ಬಂದಿದೆ. ಕೆಲವು ರೋಗಗಳಿಗೆ ಔಷದಿ ಉಂಟು ಆದರೆ ಕೆಲವು ರೋಗಗಳಿಗೆ ಇಲ್ಲ. '
ಸಿದ್ಧಾರ್ಥನಿಗೆ ಇನ್ನು ಆಶ್ಚರ್ಯ ಆಯಿತು. ಮುಂದೆ ಹೋದರೆ ಒಬ್ಬ ತುಂಬಾ ವಯಸಾದವನು ಕಾಣಿಸಿದನು. ಅವನ ಮೇಯೆಲ್ಲ ಬಗ್ಗಿಹೋಗಿತ್ತು. ಬಿಳಿಕೂದಲು. ಸರಿಯಾಗಿ ನಿಲ್ಲಲ್ಲೂ ಆಗದೆ ಕೋಲಿನ ಸಹಾಯದಿಂದ ನಿಂತಿದ್ದನು. . 'ಚನ್ನ, ಅದು ಯಾರು? ಯಾಕೆ ಅವನು ಅಷ್ಟೊಂದು ಬಗ್ಗಿದ್ದಾನೆ ? ಯಾಕೆ ಕೋಲು ಹಿಡಿದಿರುವುದು ಅವನು?'
ಚನ್ನ ಹೇಳಿದನು - 'ಸ್ವಾಮಿ, ಅವನಿಗೆ ವಯಸ್ಸಾಗಿದೆ ಸ್ವಾಮಿ. ವಯಸ್ಸಾದಮೇಲೆ ಎಲ್ಲರಿಗು ಶಕ್ತಿ ಕಮ್ಮಿ ಆಗುವುದು ಕೂದಲು ಬೆಳ್ಳಗಾಗುವುದು ಸಹಜ.'
'ನನಗೂ ವಯಸ್ಸಾಗತ್ತ, ಚನ್ನ?' ಎಂದು ಕೇಳಿದನು ಸಿದ್ಧಾರ್ಥ.
'ಹೌದು ಸ್ವಾಮಿ'
ಮತ್ತೆ ಒಂದು ಚೂರು ಮುಂದೆ ಹೋದರೆ ನಾಲ್ಕು ಜನ ಒಂದು ಶವವನ್ನು ಎತ್ತಿಕೊಂಡು ಹೋಗುತ್ತಿದ್ದರು. ಸಿದ್ಧಾರ್ಥ ಕೇಳಿದನು 'ಚನ್ನ, ಅದು ಯಾಕೆ ಅವನನ್ನು ಹಾಗೆ ಎತ್ತಿಕೊಂಡು ಹೋಗುತ್ತಿದ್ದಾರೆ? ಏನಾಯಿತು ಅವನಿಗೆ?'
ಚನ್ನ ಹೇಳಿದನು 'ಸ್ವಾಮಿ, ಆ ಮನುಷ್ಯನ ಜೀವ ಹೊರಟು ಹೋಗಿದೆ. ಅವನು ಸತ್ತು ಹೋಗಿದ್ದಾನೆ ಸ್ವಾಮಿ '
'ನಾನೂ ಸಾಯುತ್ತೀನಾ, ಚನ್ನ?' ಸಿದ್ಧಾರ್ಥ ಎಂದು ಕೇಳಿದ.
'ಹೌದು ಸ್ವಾಮಿ'
ಇದನ್ನು ಕೇಳಿದ ಬುದ್ಧನ ಮನಸಲ್ಲಿ ವೈರಾಗ್ಯ ಹುಟ್ಟಿತು. ಇಷ್ಟೊಂದು ಕಷ್ಟಗಳು ಜನ ಅನುಭವಿಸುತ್ತಿರುವಾಗ ಅವನು ಮಾತ್ರ ಹೇಗೆ ಸುಖವಾಗಿ ಅರಮನೆಯಲ್ಲಿ ಇರಬಹುದು? ಈ ಕಷ್ಟಗಳಿಂದ ಹೊರಗೆ ಬರುವ ಮಾರ್ಗ ಇಲ್ಲವೇ? ತನ್ನ ಈ ಪ್ರಶ್ನೆಯ ಉತ್ತರಕ್ಕಾಗಿ ಬುದ್ಧನು ಅರಮನೆ ತ್ಯಜಿಸಿ ಒಂದು ಸನ್ಯಾಸಿ ಆದನು.
ಸನ್ಯಾಸಿ ಆಗಿ ಒಂದು ಅರಳಿ ಮರದ ಕೆಳಗೆ ಕುಳಿತು ಜೀವನದ ಸಮಸ್ತ ಕಷ್ಟಗಳ ಮೇಲೆ ವಿಚಾರ ಮಾಡುತ್ತಾ ಧ್ಯಾನ ಮಾಡಿದನು. ಹಲವಾರು ವರ್ಷಗಳ ಸಾಧನೆಯ ನಂತರ ಅವನಿಗೆ ಜ್ಞಾನೋದಯವಾಗಿ ನಿರ್ವಾನಾ ಹೊಂದಿದನು. ಅವನು ಸಿದ್ಧಾರ್ಥನಿಂದ ಗೌತಮ ಬುದ್ಧನಾದನು.
ಎಷ್ಟೇ ಮಗನನ್ನು ಚಕ್ರವರ್ತಿ ಆಗಿಸಬೇಕೆಂದು ಪ್ರಯತ್ನಪಟ್ಟರು ಸಿದ್ಧಾರ್ಥನು ಸನ್ಯಾಸಿಯೇ ಆದನು. ಮಾನವರು ಎಂದೂ ಗೌರವಿಸುವಂಥ ಗುರುವಾದನು.