Friday, July 10, 2020

Stories for kids - 11 - Karna (part 2)

ಕರ್ಣನ ಕಥೆ - (ಎರಡನೆಯ ಭಾಗ)

ಕರ್ಣ ಮಹಾ ದಾನಿ ಆದ್ದರಿಂದ ಕೃಷ್ಣನಿಂದ 'ದಾನ ವೀರ ಶೂರ ಕರ್ಣ' ಎಂದು ಬಿರುದ್ದು ಪಡೆದನು. ಅವನ ಈ ಔದಾರ್ಯದಿಂದ ಅನೇಕ ಕಷ್ಟ ಅನುಭವಿಸಿದನು. 

ಕುರುಕ್ಷೇತ್ರ ಯುದ್ಧ ಆಗುವ ನಿಶ್ಚಯ ಆದಮೇಲೆ ಕುಂತಿಯು  ಕರ್ಣನನ್ನು ಭೇಟಿಆದಳು. ಕರ್ಣನು ಸಂಧ್ಯಾವಂದನೆ ಮಾಡುತ್ತಿರುವಾಗ ಕುಂತಿ ಕರ್ಣನ ಬಳಿ ಹೋದಳು. 
'ಕರ್ಣ, ನೀನು ವಾಸ್ತವಿಕವಾಗಿ ನನ್ನ ಜ್ಯೇಷ್ಠ ಪುತ್ರ. ಹಾಗಾಗಿ ಪಾಂಡವರಿಗೆ ಅಣ್ಣನು. ಈ ವಿಷಯ ಎಲ್ಲರ ಹತ್ತಿರ ಹೇಳಿದರೆ ಸಾಕು. ನಿನ್ನ ಪ್ರಿಯ ಮಿತ್ರ ದುರ್ಯೋಧನ ನಿನ್ನ ವಿರುದ್ಧ ಯುದ್ಧ ಮಾಡುವುದಿಲ್ಲ. ಯುಧಿಷ್ಠಿರ, ನೀನು ಅಣ್ಣನೆಂದು ತಿಳಿದರೆ, ಯುದ್ಧಕ್ಕೆಎಂದೂ  ಒಪ್ಪುವುದಿಲ್ಲ, ನಿನ್ನನ್ನೇ ರಾಜನಾಗಿ ಮಾಡುವನು. ಈ ವಿಷಯ ಎಲ್ಲರ ಹತ್ತಿರ ಹೇಳು, ಕರ್ಣ!' ಎಂದು ಕೇಳಿಕೊಂಡಳು ಕುಂತಿ. 
ಕರ್ಣನಿಗೆ ಅವನ ಜನ್ಮರಹಸ್ಯದ ವಿಷಯವನ್ನು ಕೃಷ್ಣನು ಆಗಲೇ ಹೇಳಿದ್ದನು. ಹಾಗಾಗಿ ಇದೇನು ಆಶ್ಚರ್ಯದ ವಿಷಯವಾಗಿರಲಿಲ್ಲ ಅವನಿಗೆ  
'ಮಾತೆ, ನೀನು ನನ್ನನ್ನು ಹುಟ್ಟಿದಾಗ ಸಮಾಜದ ಭಯದಿಂದ ಗಂಗೆಯಲ್ಲಿ ಬಿಟ್ಟಿದ್ದೆ. ಇಂದು ಕೂಡ ನೀನು ಸಮಾಜದ ಭಯದಿಂದ ಹೀಗೆ ಯಾರೂ  ನೋಡದಿರುವ ಸ್ಥಳದಲ್ಲಿ ಬಂದು ಭೇಟಿ ಆದೆ. ನೀನು ಬೇಕಿದ್ದರೆ ಈ ವಿಷಯ ನೀನೆ ಎಲ್ಲರ ಹತ್ತಿರ ಹೇಳಬಹುದಿತ್ತು. ನನ್ನನ್ನು ಗರ್ವದಿಂದ ಮಗನೆಂದು ಸ್ವೀಕರಿಸಬಹುದಿತ್ತು. ಆದರೆ ನೀನು ಹಾಗೆ ಮಾಡಲಿಲ್ಲ. ನೀನು ಕೇಳುತ್ತಿರುವುದು ನಾನು ಕೊಡಲು ಸಾಧ್ಯವಿಲ್ಲ. ನಾನು ಈ ಹಂತದಲ್ಲಿ ದುರ್ಯೋಧನನ ಪರ ಬಿಡುವುದು ಸಾಧ್ಯವಿಲ್ಲ. ಆದರೆ ನೀನು ನನ್ನಲ್ಲಿ ಕೇಳಿಕೊಂಡು ಬಂದಿರುವುದರಿಂದ ನಿನ್ನನ್ನು ಬರಿ ಕಯ್ಯಿ ಹಿಂತಿರುಗಿಸುವುದು ನನಗೆ ಇಷ್ಟ ಇಲ್ಲ.'

ಮುಂದುವರೆಯುತ್ತ 'ಮಾತೆ, ಸಮಾಜದ ದೃಷ್ಟಿಯಲ್ಲಿ ೫ ಪಾಂಡವರಿದ್ದಾರೆ. ಯುದ್ಧ ಆದಮೇಲೂ ಕೂಡ ೫ ಜನ ಪಾಂಡವರೇ ಇರುತ್ತಾರೆ. ನಾನು ಬದುಕಿದರೆ ಅರ್ಜುನ ಇರುವುದಿಲ್ಲ. ಅರ್ಜುನ ಬದುಕಿದರೆ  ನಾನು ಇರುವುದಿಲ್ಲ. ನಿನ್ನ ಮಕ್ಕಳ ಸಂಖ್ಯೆ ಬದಲಾಗುವುದಿಲ್ಲ.'

ತಾಯಿಗೆ ಕೊಟ್ಟ ಈ ಮಾತಿನಿಂದ, ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನು ಯುಧಿಷ್ಠಿರ, ಭೀಮ, ನಕುಲ, ಸಹದೇವರನ್ನು ಸೋಲಿಸಿದರೂ  ಅವರನ್ನು ಸಾಯಿಸುಲ್ಲ. 
--
ಕರ್ಣನ  ಕವಚ ಕುಂಡಲಗಳು ಇರುವವರುಗೂ ಅವನನ್ನು ಸಾಯಿಸುವುದು ಸಾಧ್ಯವಿಲ್ಲ ಎಂದು ತಿಳಿದು ಅರ್ಜುನನ ತಂದೆ ಆದಇಂದ್ರನು ಒಂದು ಉಪಾಯ ಮಾಡಿದನು. 

ಕರ್ಣನ ದಾನ ಮಾಡುವು ಸ್ವಭಾವ ತಿಳಿದಿದ್ದ ಸೂರ್ಯ ದೇವ ಒಮ್ಮೆ ಪ್ರಕಟವಾಗಿ 'ಕರ್ಣ, ನಾಳೆ ಬೆಳಿಗ್ಗೆ ಒಂದು ಬ್ರಾಹ್ಮಣನ ವೇಷದಲ್ಲಿ ಇಂದ್ರನು ಬಂದು ನಿನ್ನ ಕವಚ ಕುಂಡಲಗಳನ್ನು ಕೇಳುತ್ತಾನೆ. ನೀನು ಕೊಡಬೇಡ. ನಿನ್ನ ಕವಚ ಇರುವವರೆಗೂ ನಿನನ್ನು ಯಾವ ಅಸ್ತ್ರವು ಏನೂ ಮಾಡಲಾರದು. '

ನಮಸ್ಕರಿಸುತ್ತ ಕರ್ಣ ಎಂದನು 'ಸೂರ್ಯ ದೇವ , ನನ್ನನ್ನು ಯಾರಾದರೂ ಏನಾದರೂ ಕೇಳಿದರೆ ನಾನು ಅದನ್ನು ನಿರಾಕರಿಸುವುದಿಲ್ಲ. ನನ್ನ ಪ್ರಾಣಕ್ಕೆ ಹಾನಿಯಾದರೂ ಸರಿ. '

ಸೂರ್ಯನು ಹೇಳಿದಂತೆಯೇ ಮರು ದಿನ ಬೆಳಿಗ್ಗೆ ಇಂದ್ರನು ಬ್ರಾಹ್ಮಣನ ವೇಷದಲ್ಲಿ ಬಂದನು. ಬಂದು ಕರ್ಣನ ಕವಚ ಕುಂಡಲಗಳನ್ನು ಕೇಳಿದನು. ಕರ್ಣನು ನಿಸ್ಸಂದೇಹವಾಗಿ ಅದನ್ನು ಕೂಡ ದಾನ ಮಾಡಿದನು. 
ಇಂದಿರನ ಹೃದಯ ಕರಗಿತು. 
ಕರ್ಣನಿಗೆ ಅವನ ಹತ್ತಿರ ಇದ್ದ ಶಕ್ತಿ ಅಸ್ತ್ರವನ್ನು ಕೊಟ್ಟನು. ಆ ಶಕ್ತಿ ಅಸ್ತ್ರವನ್ನು ಕರ್ಣ ಅರ್ಜುನನಿಗೆ ಎಂದು ವಿಶೇಷವಾಗಿ ಇಟ್ಟಿದ್ದನು. ಆದರೆ ಘಟೋತ್ಕಚನನ್ನು ಕೊಲ್ಲಲು ಉಪಯೋಗಿಸಬೇಕಾಯಿತು. 
---

ಮಹಾಭಾರತದಲ್ಲಿ ಕರ್ಣನನ್ನು  'ಸೂತ ಪುತ್ರ' ಎಂದು ಪಾಂಡವರೆಲ್ಲರೂ ಕರೆಯುತ್ತಿದ್ದರು. ಆಗಿನ ಕಾಲ ಹೇಗಿತ್ತೆಂದರೆ ಕೆಳಜಾತಿಯವನು ಅವನ ಜಾತಿಯ ವೃತ್ತಿ ಬಿಟ್ಟು ಬೇರೆಯದು ಆರಿಸಿದರೆ ಅದೇ ತಪ್ಪು ಎನ್ನುವಂತೆ ಆಡಿಕೊಳ್ಳುತ್ತಿದ್ದರು. ಕುರುಕ್ಷೇತ್ರದಲ್ಲಿ ಅರ್ಜುನನ ವಿರುದ್ಧ ಯುದ್ಧ ಮಾಡಿದಾಗ ಕರ್ಣನ ರಥ ನೆಲದಲ್ಲಿ ಕುಗ್ಗಿ  ಹೋಗುತ್ತೆ. ಕರ್ಣನ ಸಾರಥಿಯಾದ ಶಲ್ಯ ರಾಜನು ಸಹಾಯ ಮಾಡಲಿಲ್ಲ. ಶಲ್ಯನು ವಾಸ್ತವವಾಗಿ ನಕುಲ ಸಹದೇವರ ಸೋದರ ಮಾವನು. ಕರ್ಣನು ರಥದ ಚಕ್ರ ಎತ್ತುತ್ತಿರುವಾಗ ಅರ್ಜುನನು ಬಾಣ ಬಿಟ್ಟು ಅವನನ್ನು ಕೊಂದನು. ಹೀಗಾಗಿ ಒಬ್ಬ ಸಾರಾರ್ಥಿ ಮಗನೆನ್ನಿಸಿಕೊಂಡವನು ಕೊನೆಗೆ ಸಾರಥಿ ಮಾಡುವ ಕೆಲಸ ಮಾಡುತ್ತಲೇ ಪ್ರಾಣ ಕಳೆದುಕೊಂಡನು. 
---

ಹಿಂದೂ ಧರ್ಮದಲ್ಲಿ ಕರ್ಮ ಎನ್ನುವುದು ತುಂಬಾ ಮುಖ್ಯ. ನಾವು ಏನಾದರೂ ಕಷ್ಟ ಪಡುತ್ತಿದರೆ ಅದು 'ನಮ್ಮ ಕರ್ಮ ' ಎಂದೆನ್ನುತ್ತೀವಿ. ಅಂದರೆ ಹಿಂದೆ ಮಾಡಿದ ಕೆಟ್ಟ ಕರ್ಮಗಳಿಂದ ಇಂದು ನಮಗೆ ಕಷ್ಟ ಆಗುತ್ತಿದೆ ಎಂದು. ಹಾಗೆಯೇ ಹಿಂದೆ ಮಾಡಿದ್ದ ಒಳ್ಳೆ ಕರ್ಮಗಳ ಫಲ ಇಂದು ಸಿಗಬಹುದು. 

ರಾಮಾಯಣದಲ್ಲಿ ವಾಲಿ-ಸುಗ್ರೀವರಿಗೆ ಯುದ್ಧ ಆದಾಗ ರಾಮನು ಸುಗ್ರೀವನ ಪರ ಇದ್ದನು. ಸುಗ್ರೀವನು ಸೂರ್ಯ ಪುತ್ರನು. ವಾಲಿ ಇಂದ್ರನ ಪುತ್ರನು. ಮಹಾಭಾರತದಲ್ಲಿ ವಿಷ್ಣು ಕೃಷ್ಣನಾಗಿ ಬಂದನು. ಇಂದ್ರನ ಮಗನಾದ ಅರ್ಜುನನ ಪರ ಇದ್ದನು. ಸೂರ್ಯನ ಮಗ ಕರ್ಣನನ್ನ ಸೋಲಿಸಲು ಸಹಾಯ ಮಾಡಿದನು. ಹೀಗೆ ವಿಷ್ಣು ಒಂದು ಜನ್ಮದಲ್ಲಿ ಸೂರ್ಯನ ಮಗನಿಗೆ ಸಹಾಯ ಮಾಡಿದನು, ಮತ್ತೊಂದು ಜನ್ಮದಲ್ಲಿ ಇಂದ್ರನ ಮಗನಿಗೆ ಸಹಾಯ ಮಾಡಿದನು. 

ಏನಿರಬಹುದು ನೀತಿ?

೧. ಕರ್ಣ ದಾನಿ ಸರಿ. ಆದರೆ ಕೆಟ್ಟ ಉದ್ದೇಶದಿಂದ ಬಂದ ಇಂದ್ರನಿಗೆ ಕವಚ ಕುಂಡಲ ದಾನ ಮಾಡುವ ಅಗತ್ಯ ಇತ್ತೇ? ಕೆಲವೊಮ್ಮೆ ಬೇರೆಯವರು ನಮಗೆ ಕೊಟ್ಟ ಹೆಸರನ್ನು ಉಳಿಸಿಕೊಳ್ಳಬೇಕೆಂದು ಏನೆಲ್ಲಾ ಮಾಡುತ್ತೀವಿ! ಆದರೆ ಕರ್ಣ ಹೀಗೆ ಮಾಡದೆ ಇದ್ದಿದ್ದರೆ ಕರ್ಣನನ್ನ ನಾವು ದಾನ ಶೂರ ಎಂದು ಕರೆಯುತ್ತಿದ್ದವೇ? 

No comments:

Post a Comment